ಬೆಂಗಳೂರು: ಬೆಂಗಳೂರಿನಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಸಂತೋಷ್ ಕೊಲೆ ಪ್ರಕರಣದ ತನಿಖೆ ಕೈಗೊಂಡಿರುವ ಕೇಂದ್ರೀಯ ಅಪರಾಧ ತನಿಖಾ ದಳ (ಸಿಸಿಬಿ), ಈ ಹತ್ಯೆ ಯಾವ ಕೋಮು ದ್ವೇಷ ಅಥವಾ ರಾಜಕೀಯ ವೈಶಮ್ಯದಿಂದ ಸಂಭವಿಸಿಲ್ಲ. ಇದು ಕೇವಲ ಹಳೆಯ ವೈಯಕ್ತಿಕ ದ್ವೇಷದಿಂದಾಗಿ ಉಂಟಾಗಿದೆ ಎಂದು ತೀರ್ಮಾನಕ್ಕೆ ಬಂದಿದೆ. ಅಲ್ಲದೆ ಈ ಹಿಂದೆ ಹೇಳಿದ್ದಂತೆ ಸಂತೋಷ್ ಕೊಲೆಗಾಗಿ ಸ್ಕ್ರೂ ಡ್ರೈವರ್ ಬಳಸಿಲ್ಲ, ಚಾಕುವಿನಿಂದ ತಿವಿದು ಹತ್ಯೆ ಮಾಡಲಾಗಿದೆ ಎಂದು ಸಿಸಿಬಿ ತನಿಖೆಯಲ್ಲಿ ಕಂಡುಬಂದಿದೆ.