ಮಗನ ಸಾವು ಹಿಂಬಾಲಿಸಿದ ತಂದೆ !

ಮಗನ ಸಾವಿನ ದು:ಖದಿಂದ ಕಂಗಲಾದ ತಂದೆಯೂ ಕೂಡಾ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಮೈಸೂರಿನ ಬೇಳವಾಡಿಯಲ್ಲಿ ನಿನ್ನೆ ನಡೆದಿದೆ.
ಮೈಸೂರಿನ ಬೆಳವಾಡಿಯಲ್ಲಿ ನಿನ್ನೆ ಮೃತಪಟ್ಟ ತಂದೆ ಮತ್ತು ಮಗನ ಚಿತ್ರ
ಮೈಸೂರಿನ ಬೆಳವಾಡಿಯಲ್ಲಿ ನಿನ್ನೆ ಮೃತಪಟ್ಟ ತಂದೆ ಮತ್ತು ಮಗನ ಚಿತ್ರ

ಮೈಸೂರು: ಮಗನ ಸಾವಿನಿಂದ ದು;ಖಿತರಾಗಿದ್ದ ತಂದೆಯೂ ಕೂಡಾ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಮೈಸೂರಿನ ಬೆಳವಾಡಿಯಲ್ಲಿ ನಿನ್ನೆ ನಡೆದಿದೆ.

ಬೈರೇಗೌಡ ಹಾಗೂ ಆತನ ತಂದೆ ಪುಟ್ಟೇಗೌಡ ಮೃತಪಟ್ಟ ದುರ್ದೈವಿಗಳು. ಇಬ್ಬರ ಮೃತದೇಹಗಳನ್ನು ಒಂದೇ ಕಡೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪುಟ್ಟೇಗೌಡರು,  ಬಾಯಿ ಕ್ಯಾನ್ಸರ್ ನಿಂದ ನರಳುತ್ತಿದ್ದ ಬೈರವನಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಸಾಕಷ್ಟು ಖರ್ಚು ಮಾಡಿದ್ದರು. ಆದರೆ, ಬೈರವ ಬದುಕುಳಿಯಲಿಲ್ಲ. ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದರು.

 ಇದರಿಂದ ಸಾಕಷ್ಟು ಮನನೊಂದಿದ್ದ ಪುಟ್ಟೆಗೌಡರಿಗೆ ಬೈರವನ ಅಂತಿಮ ಯಾತ್ರೆಯ ಸಂದರ್ಭದಲ್ಲಿಯೇ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಬೈರವನ ಅಂತಿಮ ವಿಧಿ ವಿಧಾನ ಕಾರ್ಯಗಳನ್ನು ಸ್ಥಗಿತಗೊಳಿಸಿದ ಗ್ರಾಮಸ್ಥರು, ತಂದೆ ಹಾಗೂ ಮಗನ ಅಂತ್ಯಸಂಸ್ಕಾರವನ್ನು ಒಟ್ಟಿಗೆ ನೆರವೇರಿಸಿದರು. ತಂದೆ ಹಾಗೂ ಮಗನ ಸಾವಿನಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com