ರೈತ ಮುಖಂಡ ಪುಟ್ಟಣ್ಣಯ್ಯ ನಿಧನ: ಮಂಡ್ಯದಲ್ಲಿ ನೊಂದ ಅಭಿಮಾನಿ ಆತ್ಮಹತ್ಯೆ

ಶಾಸಕ, ರೈತ ಮುಖಂಡ ಪುಟ್ಟಣ್ಣಯ್ಯ ಅವರ ಅಗಲಿಕೆಯ ನೋವಿನಿಂದ ಅವರ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ....
ಕೆ.ಎಸ್ ಪುಟ್ಟಣ್ಣಯ್ಯ
ಕೆ.ಎಸ್ ಪುಟ್ಟಣ್ಣಯ್ಯ
Updated on
ಮಂಡ್ಯ: ಶಾಸಕ, ರೈತ ಮುಖಂಡ ಪುಟ್ಟಣ್ಣಯ್ಯ ಅವರ ಅಗಲಿಕೆಯ ನೋವಿನಿಂದ ಅವರ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕ್ಯಾತನಹಳ್ಳಿ ಗ್ರಾಮದ ಚಂದು(27) ಮಹದೇಶ್ವರ ದೇವಸ್ಥಾನದ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತ ಚಂದು ಅವರು ಪುಟ್ಟಣ್ಣಯ್ಯ ಅವರ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ. ಅವರೊಂದಿಗೆ ಪಗಡೆ ಆಟವಾಡುತ್ತಿದ್ದರು..
ಭಾನುವಾರ ತೀವ್ರ ಹೃದಯಾಘಾತದಿಂದ ಮೃತಪಟ್ಟ ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದ್ದು, ಪಾರ್ಥಿವ ಶರೀರವನ್ನು ಶ್ರೀರಂಗಪಟ್ಟಣದಿಂದ ಬೈಕ್​ ರ್ಯಾಲಿ, ಮೆರವಣಿಗೆ ಮೂಲಕ ಪಾಂಡವಪುರಕ್ಕೆ ತರಲಾಗುತ್ತಿದೆ.
ಪುಟ್ಟಣ್ಣಯ್ಯ ಅವರು ಹುಟ್ಟೂರು ಕ್ಯಾತನಹಳ್ಳಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು. ಮೌಢ್ಯ ವಿರೋಧಿಸುತ್ತಿದ್ದ ಪುಟ್ಟಣ್ಣಯ್ಯ ಅಂತ್ಯಕ್ರಿಯೆಯನ್ನು ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com