ಬೆಳಗಾವಿ: ಚಳಿ ಕಾಯಿಸಲು ಹಚ್ಚಿದ್ದ ಬೆಂಕಿಗೆ ಬಿದ್ದು ಪಾನಮತ್ತ ಕಾವಲುಗಾರನೊಬ್ಬ ಸಜೀವ ದಹನವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಉಧಮ್ ಭಾಗ್ ಬಳಿ ನಡೆದಿದೆ. .ಪ್ರಭಾಕರ ವಸಂತ ಕುಕಳೇಕರ್ (61) ಮೃತ ದುರ್ದೈವಿಯಾಗಿದ್ದಾನೆ. ಈತ ಮ್ಯಾನಸನ್ ಎಂಜಿನಿಯರ್ ಕಂಪನಿಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ. .ಚಳಿ ಕಾಯಿಸುವ ಸಲುವಾಗಿ ಬೆಂಕಿ ಹಚ್ಚಲಾಗಿದ್ದು, ದುರದೃಷ್ಟವಶಾತ್ ಆಕಸ್ಮಿಕವಾಗಿ ಬೆಂಕಿಗೆ ಬಿದ್ದಿರಬಹುದು ಎಂದು ಪೊಲೀಸರುಹೇಳಿದ್ದಾರೆ. .ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಭಾಕರ್ ಅವರ ಕುಟುಂಬ ಸದಸ್ಯರನ್ನು ವಿಚಾರಣೆಗೊಳಪಡಿಸಿದ್ದಾರೆ. .ಸ್ಥಳೀಯ ನಾಯಿಗಳು ಪ್ರಭಾಕರ್ ಅವರ ಮೃತದೇಹವನ್ನು ತಿದ್ದಿದ್ದು, ಇದರ ಪರಿಣಾಮ ದೇಹ ಎರಡು ತುಂಡುಗಳಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಬೆಳಗಾವಿ: ಚಳಿ ಕಾಯಿಸಲು ಹಚ್ಚಿದ್ದ ಬೆಂಕಿಗೆ ಬಿದ್ದು ಪಾನಮತ್ತ ಕಾವಲುಗಾರನೊಬ್ಬ ಸಜೀವ ದಹನವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಉಧಮ್ ಭಾಗ್ ಬಳಿ ನಡೆದಿದೆ. .ಪ್ರಭಾಕರ ವಸಂತ ಕುಕಳೇಕರ್ (61) ಮೃತ ದುರ್ದೈವಿಯಾಗಿದ್ದಾನೆ. ಈತ ಮ್ಯಾನಸನ್ ಎಂಜಿನಿಯರ್ ಕಂಪನಿಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ. .ಚಳಿ ಕಾಯಿಸುವ ಸಲುವಾಗಿ ಬೆಂಕಿ ಹಚ್ಚಲಾಗಿದ್ದು, ದುರದೃಷ್ಟವಶಾತ್ ಆಕಸ್ಮಿಕವಾಗಿ ಬೆಂಕಿಗೆ ಬಿದ್ದಿರಬಹುದು ಎಂದು ಪೊಲೀಸರುಹೇಳಿದ್ದಾರೆ. .ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಭಾಕರ್ ಅವರ ಕುಟುಂಬ ಸದಸ್ಯರನ್ನು ವಿಚಾರಣೆಗೊಳಪಡಿಸಿದ್ದಾರೆ. .ಸ್ಥಳೀಯ ನಾಯಿಗಳು ಪ್ರಭಾಕರ್ ಅವರ ಮೃತದೇಹವನ್ನು ತಿದ್ದಿದ್ದು, ಇದರ ಪರಿಣಾಮ ದೇಹ ಎರಡು ತುಂಡುಗಳಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ