ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರಿಗೆ ಬೆಳ್ಳಿಯ ಗದೆ, ಕಿರೀಟ ಸೇರಿದಂತಚೆ ಹಲವು ಬೆಳ್ಳಿಯ ಆಭರಣಗಳು ಉಡುಗೊರೆಯಾಗಿ ಬಂದಿವೆ. ಈ ಆಭರಣಗಳನ್ನು ಮಹದೇಶ್ವರನಿಗೆ ನೀಡಲು ಮುಂದಾಗಿರುವ ಸಿದ್ದರಾಮಯ್ಯ ಅವರು, ಅದರಿಂದ ಬೆಳ್ಳಿಯ ರಥ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.