ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಂಬಂಧ ನಿನ್ನೆ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸುವಂತೆ 30 ಸಚಿವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ರೋಷನ್ ಬೇಗ್, ಆರ್.ವಿ.ದೇಶಪಾಂಡೆ, ಹೆಚ್ ಆಂಜನೇಯ, ಹೆಚ್.ಎಂ. ರೇವಣ್ಣ, ಹೆಚ್.ಕೆ. ಪಾಟೀಲ್ ಈ ಐವರು ಮಾತ್ರ ಸಭೆಯಲ್ಲಿ ಹಾಜರಿದ್ದರು. ಸಚಿವರ ಅನುಸ್ಥಿತಿಗೆ ಪರಮೇಶ್ವರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.