ಲೋಕಾಯುಕ್ತ ರಿಜಿಸ್ಟಾರ್ ವಿರುದ್ಧ ನಿಲುವಳಿ ಸೂಚನೆ: ಅವಿವೇಕದ ಕ್ರಮ ಕೈಗೊಳ್ಳದಂತೆ ವಿಧಾನಸಭೆಗೆ ಹೈಕೋರ್ಟ್ ಸೂಚನೆ

ಕರ್ನಾಟಕ ಲೋಕಾಯುಕ್ತ ರಿಜಿಸ್ಟಾರ್ ವಿರುದ್ಧ ನಿಲುವಳಿ ಸೂಚನೆ ಮಂಡಿಸಿದ್ದ ಕರ್ನಾಟಕ ವಿಧಾನಸಭೆಗೆ ಹಿನ್ನಡೆ ಉಂಟಾಗಿದ್ದು, ಅವಿವೇಕದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಕರ್ನಾಟಕ ವಿಧಾನಸಭೆಗೆ ಸೂಚನೆ
ಹೈಕೋರ್ಟ್
ಹೈಕೋರ್ಟ್
Updated on
ಬೆಂಗಳೂರು: ಕರ್ನಾಟಕ ಲೋಕಾಯುಕ್ತ ರಿಜಿಸ್ಟಾರ್ ವಿರುದ್ಧ ನಿಲುವಳಿ ಸೂಚನೆ ಮಂಡಿಸಿದ್ದ ಕರ್ನಾಟಕ ವಿಧಾನಸಭೆಗೆ ಹಿನ್ನಡೆ ಉಂಟಾಗಿದ್ದು, ಅವಿವೇಕದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಕರ್ನಾಟಕ ವಿಧಾನಸಭೆಗೆ ಸೂಚನೆ ನೀಡಿದೆ. 
ಲೋಕಾಯುಕ್ತ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಂತರ ನಿಲುವಳಿ ಸೂಚನೆ ವಿರುದ್ಧ ಹೈಕೋರ್ಟ್ ನ ನ್ಯಾ.ಎಎಸ್ ಭೋಪಣ್ಣ ಅವರು ಮಧ್ಯಂತರ ಆದೇಶ ಹೊರಡಿಸಿದ್ದು, ವಿಧಾನಸಭಾಧ್ಯಕ್ಷರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಪ್ರಕರಣದಲ್ಲಿ ಹೆಸರಿಸಲಾಗಿದ್ದವರಿಗೆ ನೊಟೀಸ್ ಜಾರಿ ಮಾಡಲಾಗಿದೆ. 
ಡಿ.26, 2017 ರಂದು ಕರ್ನಾಟಕ ವಿಧಾನಸಭೆಯಿಂದ ಜಾರಿಯಾಗಿದ್ದ ನಿಲುವಳಿ ಸೂಚನೆಗೆ ಸಂಬಂಧಿಸಿದ್ದ ನೋಟಿಸ್ ನ್ನು ಲೋಕಾಯುಕ್ತ ಹಾಗೂ ರಿಜಿಸ್ಟಾರ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com