ಆಕಸ್ಮಿಕ ಅಗ್ನಿ ಅನಾಹುತ, 16 ಅಂಗಡಿಗಳು ಭಸ್ಮ
ಆಕಸ್ಮಿಕ ಅಗ್ನಿ ಅನಾಹುತ, 16 ಅಂಗಡಿಗಳು ಭಸ್ಮ

ಕೊಪ್ಪಳ: ಆಕಸ್ಮಿಕ ಅಗ್ನಿ ಅನಾಹುತ, 16 ಅಂಗಡಿಗಳು ಭಸ್ಮ

ಆಕಸ್ಮಿಕ ಅಗ್ನಿ ಅವಘಡದ ಕಾರಣ ವಾಹನ ಸೇರಿ 16 ಅಂಗಡಿಗಳು ಭಸ್ಮವಾಗಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯ ಕಾರಟಗಿಯಲ್ಲಿ ಸಂಭವಿಸಿದೆ.
ಗಂಗಾವತಿ: ಆಕಸ್ಮಿಕ ಅಗ್ನಿ ಅವಘಡದ ಕಾರಣ ವಾಹನ ಸೇರಿ 16 ಅಂಗಡಿಗಳು ಭಸ್ಮವಾಗಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯ ಕಾರಟಗಿಯಲ್ಲಿ ಸಂಭವಿಸಿದೆ.
ಭಾನುವಾರ ಬೆಳಗ್ಗೆ 4ಗಂಟೆ ಸುಮಾರಿಗೆ ಈ ದುರ್ಘಟನೆ ನದೆದಿದ್ದು ಬೆಂಕಿ ತಗುಲಿದ ಪರಿಣಾಮ ಮೂರು ಅಡುಗೆ ಅನಿಲದ ಸಿಲೆಂಡರ್ ಸ್ಪೋಟವಾಗಿದೆ.
ಈ ವೇಳೆ ರಾಜ್ಯ ಹೆದ್ದಾರಿಯಲ್ಲಿದ್ದ ವಿಶೇಷ ತಹಶೀಲ್ದಾರ್ ಕಛೇರಿಯ ಮುಂಭಾಗದ ಶೆಡ್ ಗಳೂ ಸಹ ಸುಟ್ಟು ಭಸ್ಮವಾಗಿದೆ. ಈ ಶೆಡ್ ಗಳಲ್ಲಿ ಮೆಕ್ಯಾನಿಕ್, ಕಟಿಂಗ್ ಶಾಪ್, ಹೊಟೇಲ್, ಪಾನ್ ಅಂಗಡಿಗಳು ಇದ್ದು ಒಂದೊಂದರಲ್ಲಿ ಇಬ್ಬರು ಅಥವಾ ಮೂವರು ವ್ಯಾಪಾರ ನಡೆಸುತ್ತಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದೆ.ಇದರಿಂದಾಗಿ ಯಾವುದೇ ಜೀವಹಾನಿಯಾಗುವುದು ತಪ್ಪಿದೆ.
ಘಟನಾ ಸ್ಥಳಕ್ಕೆ ಶಾಸಕರಾದ ಶಿವರಾಜ್ ತಂಗಡಗಿ, ಕಂದಾಯ, ಪೊಲೀಸ್, ಅಗ್ನಿಶಾಮಕ ಠಾಣೆ, ಜೆಸ್ಕಾಂ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು ಪ್ರಕರಣಕ್ಕೆ ನಿಖರ ಕಾರಣ ಪತ್ತೆಯಾಗಿಲ್ಲ.
"ಭಾರೀ ಅನಾಹುತ ಸಂಭವಿಸ್ದೆ ಆದರೆ ದೇವರ ಅನುಗ್ರಹದಿಂದ ಯಾವ ಪ್ರಾನ ಹಾನಿಯಾಗಿಲ್ಲ. ಒಟ್ಟು ಹದಿನಾರು ಅಂಗಡಿಗಳು ಭಸ್ಮವಾಗಿದೆ. ಎಲ್ಲವೂ ಬಡವರು ವ್ಯಾಪಾರ ನಡೆಸುವ ಅಂಗಡಿಗಳು. ಘಟನೆಯಲ್ಲಿ ಹಾನಿಗೊಳಗಾದ ಅಂಗಡಿಯವರಿಗೆ ಮುಖ್ಯಮಂತ್ರಿಗಳೊಡನೆ ಮಾತನಾಡಿ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡಲಾಗುತ್ತದೆ." ಶಾಸಕ ಶಿವರಾಜ್ ತಂಗಡಗಿ ಹೇಳಿದ್ದಾರೆ. ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com