ಕಿರ್ಮಾನಿ ಅವರಿಗೆ ಸರ್ಕಾರ ನೀಡಿದ್ದ ನಿವೇಶನದ ಭರವಸೆಯ ಕುರಿತಾಗಿ ಎಕ್ಸ್ ಪ್ರೆಸ್ ಅವರನ್ನು ಮಾತಿಗೆಳೆದಾಗ "ನಾನು ಪ್ರಾರಂಭದಲ್ಲಿ ಕೆಲವು ದಿನ ಅದನ್ನು ನಂಬಿ ಅದಕ್ಕಾಗಿ ವಿದಾನ ಸೌಧಕ್ಕೆ ತೆರಳಿ ಅಧಿಕಾರಿಗಳು, ಮಂತ್ರಿಗಳನ್ನು ಭೇಟಿ ಆಗಿದ್ದೆ. ಆದರೆ ವರ್ಷಗಳು ಉರುಳಿದಂತೆ ನಾನು ಈ ನಿವೇಶನ ಸಿಕ್ಕುವುದೆನ್ನುವ ಆಸೆಯನ್ನೇ ಕೈಬಿಟ್ಟಿದ್ದೇನೆ. ಅದಕ್ಕಾಗಿ ಅಧಿಕಾರಿಗಳ ಹಿಂದೆ ಅಲೆಯುವುದನ್ನು ಬಿಟ್ಟು ಬಿಟ್ಟಿದ್ದೇನೆ." ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.