ಚಿಕ್ಕಬಳ್ಳಾಪುರ: ಕೆಎಸ್'ಆರ್'ಟಿಸಿ ಬಸ್ ನಲ್ಲಿ ಪ್ರಯಾಣಿಸುವವರು ತಮ್ಮ ಜೊತೆ ಸಾಕು ಪ್ರಾಣಿಗಳನ್ನೋ, ಪಕ್ಷಿಗಳನ್ನೋ ಕರೆದೊಯ್ಯಬೇಕಾದರೆ ಟಿಕೆಟ್ ಪಡೆಯಲೇಬೇಕೆಂಬುದು ಸಂಸ್ಥೆ ನಿಯಮವಾಗಿದೆ. ಆದರೆ, ಇದನ್ನು ಅರಿಯದ ವ್ಯಕ್ತಿಯೊಬ್ಬರು ಎರಡು ಕೋಳಿಗಳೊಂದಿಗೆ ಪ್ರಯಾಣಿಸಿರುವ ಘಟನೆ ಗೌರಿ ಬಿದನೂರಿನಲ್ಲಿ ಭಾನುವಾರ ನಡೆದಿದೆ.