ಕಂಡ ಕಂಡಲ್ಲಿ ಸೆಲ್ಫಿ ತೆಗೆದು, ವಿಡಿಯೋ ಮಾಡುವ ಕೆಟ್ಟ ಖಯಾಲಿಗೆ ಮನುಷ್ಯ ತನ್ನ ಸಾಮಾಜಿಕ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದಾನಾ ಎಂಬ ಗಂಭೀರ ಪ್ರಶ್ನೆ ಹುಟ್ಟುಹಾಕುವಂತಿದೆ ಈ ಪ್ರಕರಣದ ವರದಿ. ಕೆಎಸ್ ಆರ್ ಟಿಸಿಯ ಭದ್ರತಾ ಸಿಬ್ಬಂದಿ ಸಿದ್ದು ಹೂಗಾರ್ (25) ರಸ್ತೆ ಅಪಘಾತಕ್ಕೀಡಾಗಿ ರಕ್ತಸ್ರಾವದಿಂದ ಬಳಲುತ್ತಿದ್ದರೆ, ನೆರೆದಿದ್ದ ಸ್ಥಳಿಯರು ಸ್ಮಾರ್ಟ್ ಫೋನ್ ನಿಂದ ಆಂಬುಲೆನ್ಸ್ ಗೆ ಕರೆ ಮಾಡಿ ಅಪಘಾತದ ಸಂತ್ರಸ್ತರನ್ನು ಬದುಕಿಸಲು ಯತ್ನಿಸುವ ಬದಲು ಫೋಟೊ ವಿಡಿಯೋ ಮಾಡುವುದರಲ್ಲಿ ನಿರತರಾಗಿದ್ದರು.