ಬೆಂಗಳೂರು: ಜ್ಯೋತಿಷಿಗಳು ಹೇಳಿ ನಾನು ಪ್ರತಿದಿನ ಬೆಂಗಳೂರಿನಿಂದ ಹಾಸನ ಜಿಲ್ಲೆಯ ಹೊಳೆನರಸೀಪುರಕ್ಕೆ ಪ್ರಯಾಣ ಮಾಡುತ್ತಿಲ್ಲ. ಯಾವ ಜ್ಯೋತಿಷಿಗಳೂ ನನಗೆ ಹೇಳಿಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದ ಶಾಸಕರಾಗಿರುವ ಹೆಚ್ ಡಿ ರೇವಣ್ಣ ಕ್ಷೇತ್ರದ ಕೆಲಸ ಮಾಡಲು ಪ್ರತಿದಿನ ಬೆಂಗಳೂರಿನಿಂದ ಹೊಳೆನರಸೀಪುರಕ್ಕೆ ಪ್ರಯಾಣ ಮಾಡುತ್ತಿದ್ದಾರೆ. ಇದೇಕೆ, ಯಾರಾದರೂ ಜ್ಯೋತಿಷಿಗಳು ಹೇಳಿದ್ದಾರೆಯೇ ಎಂದು ಮಾಧ್ಯಮ ಪ್ರತಿನಿಧಿಗಳು ಅವರನ್ನು ಕಿಚಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ರೇವಣ್ಣ, ಹಾಗೇನಿಲ್ಲ, ಯಾವ ಜ್ಯೋತಿಷಿಗಳೂ, ಅರ್ಚಕರೂ ಹೇಳಿಲ್ಲ, ನನಗೆ ಸರ್ಕಾರದಿಂದ ಇದುವರೆಗೆ ಮನೆ ಹಂಚಿಕೆಯಾಗಿಲ್ಲ, ಅದಕ್ಕಾಗಿ ಕಾಯುತ್ತಿದ್ದೇನೆ ಎಂದರು.
ಕಳೆದ ಹಲವು ದಿನಗಳಿಂದ ಹೆಚ್ ಡಿ ರೇವಣ್ಣ ಪ್ರತಿನಿತ್ಯ ಬೆಂಗಳೂರಿನಿಂದ ಹಾಸನಕ್ಕೆ ಪ್ರಯಾಣ ಮಾಡುತ್ತಿದ್ದಾರೆ.
Advertisement