ಟೆಕ್ಕಿ ಅಜಿತಾಬ್ ಪ್ರಕರಣ: ಹೈಕೋರ್ಟ್ ಗೆ ತನಿಖಾ ವಿವರ ಹಸ್ತಾಂತರ

ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ವರದಿಯನ್ನುಪೋಲೀಸ್ ವರಿಷ್ಠಾಧಿಕಾರಿಗಳ ತಂಡ ರಾಜ್ಯ ಹೈಕೋರ್ಟ್ ಗೆ ಹಸ್ತಾಂತರಿಸಿದೆ.
ಟೆಕ್ಕಿ ಅಜಿತಾಬ್ ಪ್ರಕರಣ: ಹೈಕೋರ್ಟ್ ಗೆ ತನಿಖಾ ವಿವರ ಹಸ್ತಾಂತರ
ಟೆಕ್ಕಿ ಅಜಿತಾಬ್ ಪ್ರಕರಣ: ಹೈಕೋರ್ಟ್ ಗೆ ತನಿಖಾ ವಿವರ ಹಸ್ತಾಂತರ
Updated on
ಬೆಂಗಳೂರು: ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ವರದಿಯನ್ನುಪೋಲೀಸ್ ವರಿಷ್ಠಾಧಿಕಾರಿಗಳ ತಂಡ ರಾಜ್ಯ ಹೈಕೋರ್ಟ್ ಗೆ ಹಸ್ತಾಂತರಿಸಿದೆ.
ಮುಚ್ಚಿದ ಲಕೋಟೆಯಲ್ಲಿ ತನಿಖಾ ವಿವರಗಳನ್ನು ಹಸ್ತಾಂತರಿಸಲಾಗಿದ್ದು ನ್ಯಾಯಾಲಯದ ಈ ಹಿಂದಿನ ಆದೇಶದಂತೆ ಬೇರೆಯವರಿಗೆ ಈ ಪ್ರಕರಣ ತನಿಖೆ ವಿವರ ತಿಳಿಯದಂತೆ ಗೌಪ್ಯತೆ ಕಾಫಾಡಿಕೊಳ್ಳಲಾಗಿದೆ.
ಮಗನ ನಾಪತ್ತೆ ಪ್ರಕರಣವನ್ನು ಸಿಬಿಐಅ ಗೆ ವಹಿಸುವಂತೆ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿದ ಅರ್ಜಿಯು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠದೆದುರು ವಿಚಾರಣೆಗೆ ಬಂದಿತ್ತು. ಜುಲೈ 2ರ್ಂದು ನಡೆದಿದ್ದ ವಿಚಾರಣೆಯಲ್ಲಿ ನ್ಯಾಯಾಲಯವು ಇದುವರೆಗಿನ ತನಿಖೆಯ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ತನಿಖಾ ತಂಡಕ್ಕೆ ನಿರ್ದೇಶಿಸಿತ್ತು.
ಅದರಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ವಿ. ಶ್ರೀನಿಧಿ ಗುರುವಾರ ಈ ವಿವರಗಳನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಿದ್ದಾರೆ.
ವಿವರಗಳನ್ನು ಪರಿಶೀಲಿಸಿರುವ ನ್ಯಾಯಪೀಠವು ತನಿಖೆಯ ಕುರಿತಂತೆ ತೃಪ್ತಿ ವ್ಯಕ್ತಪಡಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿ ಆದೇಶಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com