ಸೋನಿಪಟ್ ನ ಕುರುಕ್ಷೇತ್ರದಲ್ಲಿ ತಮಗೆ ಉತ್ತಮ ಬೆಂಬಲ ದೊರೆಯಿತು ಎಂದುಮನೋಜ್ ತಿಳಿಸಿದ್ದಾರೆ. ಸಮಲ್ಕಾ ಗ್ರಾಮದ ಹಲವು ಯುವಕರು ನನಗೆ ದೆಹಲಿ ವರೆಗೆ ಸಾಥ್ ನೀಡಿದರು. ಎಲ್ಲರೂ ದೈಹಿಕ ಸಾಮರ್ಥ್ಯ ಉಳ್ಳವರಾಗಿದ್ದರು. ಗ್ರಾಮಸ್ಥರು, ಗುಪ್ತ್ ಅವರ ಉದ್ದೇಶ ಸಾಫಲ್ಯ ಗೊಳಿಸಲು ಆನ್ ಲೈನ್ ಪೇಮೆಂಟ್ ಮಾಡಿದ್ದಾರೆ. ಖರದುಂಗ್ಲಾದಲ್ಲಿ ಹಿಮದ ದಪ್ಪ ಹೊದಿಕೆ ಸುತ್ತುವರೆದಿತ್ತು. ದೆಹಲಿಯಲ್ಲಿ ಬೇಸಿಗೆಯಂತ ಬಿಸಿಲು, ಆದರೆ ಕರಾವಳಿಯಲ್ಲಿ ಮಳೆ, ಪ್ರಯಾಣದುದ್ದಕ್ಕು ಸೂರ್ಯ ಮತ್ತು ಮೋಡದ ಆಟ ಸುಂದರವಾಗಿತ್ತು. ಚಂಡಿಗಡದ ವಾತಾವರಣದಿಂದ ಮೂರು ದಿನ ಅಲ್ಲಿಯೇ ಬೀಡು ಬಿಟ್ಟ ಕಾರಣ ಮಂಗಳೂರು ತಲುಪುಲು ವಿಳಂಬವಾಯಿತು ಎಂದು ಹೇಳಿದ್ದಾರೆ.