ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಬಾಗಲಕೋಟೆ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ, ನಾವು ಹಲವು ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ, ಇಲ್ಲಿ ಕೃಷಿ ಮಾಡಿಕೊಂಡು ನಾವು ಅದರಿಂದ ಬಂದ ಹಣದಲ್ಲಿ ಊಟ ಮಾಡುತ್ತಿದ್ದೇವೆ, ಇಲ್ಲಿಂದ ಹೋಗಿ ಬೇರೆ ಕಡೆ ನೆಲೆಸುವುದು ಕಷ್ಟಸಾಧ್ಯ ಎಂದು ಸಾಲ್ಗುಂದಿ ಗ್ರಾಮದ ರೈತ ರಾಮಪ್ಪ ಗೋನಿ ತಿಳಿಸಿದ್ದಾರೆ, ಬಾಗಲಕೋಟೆಯ ಸುಮಾರು 50 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.