ಇದುವರೆಗೆ ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರಿಗೆ ಇಸ್ಕಾನ್ ವತಿಯಿಂದ 20 ರುಪಾಯಿಗೆ ಊಟವನ್ನು ನೀಡಲಾಗುತ್ತಿತ್ತು. ಆದರೆ ಇಸ್ಕಾನ್ ನವರು ಒಂದು ಊಟಕ್ಕೆ 25 ರುಪಾಯಿ ನೀಡುವಂತೆ ಕೇಳುತ್ತಿರುವ ಹಿನ್ನೆಲೆಯಲ್ಲಿ ಇಸ್ಕಾನ್ ಜತೆಗೆ ಇದ್ದ ಒಪ್ಪಂದ ರದ್ದು ಮಾಡಲಾಗಿದ್ದು, ಇನ್ನು ಮುಂದೆ ಇಂದಿರಾ ಕ್ಯಾಂಟೀನ್ ನಿಂದಲೇ ಪೌರ ಕಾರ್ಮಿಕರಿಗೆ ಊಟ ಪೂರೈಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ತಿಳಿಸಿದ್ದಾರೆ.