ಜೋಡಿ ಕೊಲೆ ಪ್ರಕರಣ: ರಾಯಚೂರು ಕೋರ್ಟ್ ನಿಂದ 8 ಮಂದಿಗೆ ಜೀವಾವಧಿ ಶಿಕ್ಷೆ

2014ಕ್ಕೆ ಮಾನ್ವಿ ತಾಲೂಕಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ರಾಯಚೂರು ನ್ಯಾಯಾಲಯ ಆದೇಶಿಸಿದೆ.
ಜೋಡಿ ಕೊಲೆ ಪ್ರಕರಣ: ರಾಯಚೂರು ಕೋರ್ಟ್ ನಿಂದ  8 ಮಂದಿಗೆ ಜೀವಾವಧಿ ಶಿಕ್ಷೆ
ಜೋಡಿ ಕೊಲೆ ಪ್ರಕರಣ: ರಾಯಚೂರು ಕೋರ್ಟ್ ನಿಂದ 8 ಮಂದಿಗೆ ಜೀವಾವಧಿ ಶಿಕ್ಷೆ
Updated on
ರಾಯಚೂರು: 2014ಕ್ಕೆ ಮಾನ್ವಿ ತಾಲೂಕಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ರಾಯಚೂರು ನ್ಯಾಯಾಲಯ ಆದೇಶಿಸಿದೆ.
ರಾಯಚೂರಿನ ಮಾನ್ವಿಯ ಬೊಮ್ಮನಾಳದಲ್ಲಿ ಜನವರಿ 10, 2014ರಂದು ಗೋಮಾಳ ಜಾಗಕ್ಕಾಗಿ ನಡೆದ ಗಲಾಟೆಯಲ್ಲಿ  ಇಬ್ಬರು ಕೊಲೆಯಾಗಿ ನಾಲ್ವರ ಮೇಲೆ ಹಲ್ಲೆ ನಡೆದಿತ್ತು. ಘಟನೆ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ಒಟ್ಟು 17 ಮಂದಿ ವಿರುದ್ಧ  ಪ್ರಕರಣ ದಾಖಲಾಗಿತ್ತು 
ವಿಚಾರಣೆ ಪೂರ್ಣಗೊಳಿಸಿದ ರಾಯಚೂರು  ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದ್ದು ಎಂಟು  ಮಂದಿಗೆ ಜೀವಾವಧಿ, ಮತ್ತೆ ಎಂಟು ಮಂದಿಗೆ 10 ವರ್ಷ ಜೈಲುವಾಸದ ಶಿಕ್ಷೆ ವಿಧಿಸಿದೆ. ಓರ್ವ ಆರೋಪಿಯನ್ನು ಖುಲಾಸೆ ಮಾಡಿದೆ.
ಘಟನೆಯಲ್ಲಿ ಪಾಲ್ಗೊಂಡ 16  ಮಂದಿಗೆ  3. 16 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com