ಹತ್ಯೆ ಪ್ರಕರಣ ಸಂಬಂಧ ಈ ಹಿಂದೆಯಷ್ಟೇ ಹಂತಕರ ಶಂಕಿತ ಭಾವಚಿತ್ರವನ್ನು ರಚಿಸಿದ್ದರು. ಪರಶುರಾಮ ವಾಗ್ಮೋರೆ ಬಂಧನದ ಬಳಿಕ ಸಿಐಡಿಗೆ ಕಚೇರಿಗೆ ಆಗಮಿಸಿದ್ದ ನಾಲ್ವರೂ ಪ್ರತ್ಯಕ್ಷದರ್ಶಿಗಳ ಪೈಕಿ ವಿದ್ಯಾರ್ಥಿ ಮತ್ತು ಕಾರ್ಮಿಕ, ತಾವು ಗೌರಿ ಅವರ ಮನೆ ಬಳಿ ಬೈಕ್ ನಲ್ಲಿ ಹೋಗುವಾಗ ನೋಡಿದ್ದು ಪರಶುರಾಮನೇ ಎಂದು ಹೇಳಿಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ.