ಮೂಲಗಳ ಪ್ರಕಾರ, ವಾಗ್ಮೋರೆ ಗೌರಿ ಹತ್ಯೆಗೂ ಕೆಲ ತಿಂಗಳುಗಳ ಮುಂಚೆ ಒಂದು ಗ್ಯಾಂಗ್ ಜೊತೆ ಸೇರಿಕೊಂಡಿದ್ದ. ಸಿಂಧಗಿಯಲ್ಲಿ ನಾಲ್ವರ ತಂಡ ಒಟ್ಟುಗೂಡಿ ಗೌರಿ ಹತ್ಯೆಗೆ ಪ್ಲಾನ್ ಮಾಡಿದ್ದರು. ಹಿಂದುತ್ವದ ಬಗ್ಗೆ ಅಪಾರ ಗೌರವ ಇದ್ದಿದ್ದರಿಂದ ಈ ಕೃತ್ಯಕ್ಕೆ ವಾಗ್ಮೋರೆಯನ್ನು ಆರಿಸಿಕೊಂಡಿದ್ದರು ಎಂದು ತನಿಖಾ ತಂಡದ ಮುಂದೆ ಮತ್ತೋರ್ವ ಆರೋಪಿ ಅಮೋಲ್ ಕಾಳೆ ಹೇಳಿದ್ದಾನೆ.