ಈ ನೇಮಕ ಪ್ರಕ್ರಿಯೆಗೆ ಕಾರಣಕರ್ತರಾದ ಹಾಗೂ ಆಡಳಿತಾತ್ಮಕ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ವಿಶ್ವವಿದ್ಯಾನಿಲಯದ ಅಧಿಕಾರಿ, ಸಿಬ್ಬಂದಿ ಯನ್ನು ಗುರುತಿಸಿ ಅವರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ ಹಾಗೂ ಇತರ ಅನ್ವಯಿಕ ಕಾನೂನುಗಳಡಿ ಒಂದು ತಿಂಗಳ ಒಳಗಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಈ ಪ್ರಕರಣದಲ್ಲಿ ಕೈಗೊಂಡ ಕ್ರಮದ ಬಗ್ಗೆ ಒಂದು ತಿಂಗಳ ಒಳಗಾಗಿ ಅನುಸರಣಾ ವರದಿ ನೀಡುವಂತೆ ರಾಜ್ಯ ಸರಕಾರವು ಮೈಸೂರು ವಿವಿಗೆ ಸೂಚಿಸಿದೆ. ಅಲ್ಲದೆ ಭವಿಷ್ಯದಲ್ಲಿ ವಿವಿಯಿಂದ ಕೈಗೊಳ್ಳಬಹುದಾದ ನೇಮಕ ಪ್ರಕ್ರಿಯೆಯಲ್ಲಿ ನಿಯಮಗಳು, ನೇಮಕ ಮಾರ್ಗಸೂಚಿಗಳು, ಮೀಸಲು ಕಾರ್ಯನೀತಿಯನ್ನು ಕಡ್ಡಾಯವಾಗಿ ಅನುಸರಿಸ ಬೇಕೆಂದು ಸರಕಾರ ಕಟ್ಟಪ್ಪಣೆ ಮಾಡಿದೆ.