ಸುಮಾರು 10.15 ಕ್ಕೆ ಸುಮಾರು 15 ಜನವಿದ್ದ ತಂಡವೊಂದು ರೆಸ್ಟೋರೆಂಟ್ ಗೆ ಬಂದಿತ್ತು, ಅದರಲ್ಲಿ ಮೊಹಮದ್ ನಲಪಾಡ್ ಕೂಡ ಇದ್ದ, ಅವರು ತೆರಳುವಾಗ ನನ್ನ ಕಾಲು ನಲಪಾಡ್ನ ಸ್ನೇಹಿತನಿಗೆ ತಾಕಿತು. ಆ ಕೂಡಲೇ ನಾನು ಕ್ಷಮೆ ಕೋರಿದೆ. ಆತನ ಹೆಸರು ಅರುಣ್ ಬಾಬು,ನಾನು ಕಾಲು ಚಾಚಿಕೊಂಡು ಕುಳಿತಿದ್ದಕ್ಕೆ ಆತ ನನ್ನನ್ನು ನಿಂದಿಸಿದ,ನಾನು ಮತ್ತೆ ಕ್ಷಮೆ ಕೋರಿದೆ. ಅಲ್ಲಿಂದ ತೆರಳಿ ಅವರು ಮತ್ತೊಂದು ಟೇಬಲ್ ನಲ್ಲಿ ಕುಳಿತರು, ಬಾಬು ಮತ್ತವನ ಜೊತೆಗಿದ್ದ ಕೆಲವರು ನನ್ನನ್ನು ಗುರಾಯಿಸುತ್ತಿದ್ದರು, ಇದು ನನ್ನ ಗಮನಕ್ಕೆ ಬಂದಿತು.