ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಅನುರಾಗ್ ತಿವಾರಿ ಸಹೋದರ ಮಯಾಂಕ್ ತಮ್ಮ ತಂದೆಯ ಆರೋಪವನ್ನು ನಿರಾಕರಿಸಿದ್ದಾರೆ. ನನ್ನ ತಂದೆ 75 ವರ್ಷ ವಯಸ್ಸಿನವರು, ಅವರಿಗೆ ತಮ್ಮ ಮಗನ ಸಾವಿನ ಬಗ್ಗೆ ಅಸಮಾಧಾನವಿದೆ ಹಾಗಾಗಿ ಹೇಳಿಕೆ ನೀಡಿದ್ದಾರೆ, ಅವರಿಗೆ ಸರ್ಕಾರದ ಸಹಾಯ ಬೇಕಿದೆ, ನಾವು ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವುದೇ ಆರೋಪ ಮಾಡುತ್ತಿಲ್ಲ, ಮಾಧ್ಯಮಗಳು ಇಲ್ಲಿಯವರೆಗೂ ಉಲ್ಟಾ-ಸೀದಾ ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದಾರೆ ಎಂದು ದೂರಿದ್ದಾರೆ.