ಗೌರಿ ಹತ್ಯೆ ಪ್ರಕರಣದಲ್ಲಿ ಸಾಕಷ್ಟು ಪ್ರಶ್ನೆಗಳಿದ್ದು, ಅವುಗಳಿಗೆ ಉತ್ತರ ಸಿಗಬೇಕಿದೆ. ಜೀವಂತ ಬುಲೆಟ್ ಗಳು ಹಾಗೂ ಪಿಸ್ತೂಲ್ ಗಳನ್ನು ಎಲ್ಲಿಂದ ತರಲಾಗಿತ್ತು ಎಂಬುದರ ಕುರಿತು ಉತ್ತರ ಸಿಗಬೇಕಿದೆ. ಪ್ರಕರಣವು ರಾಜಕೀಯ ಅಥವಾ ಸೈದ್ಧಾಂತಿಕ ಸಂಪರ್ಕ ಹೊಂದಿರುವಂತೆ ತೋರುತ್ತಿದ್ದು, ನವೀನ್ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಅಗತ್ಯವಿದೆ ಎಂದು ಪೊಲೀಸರು ಹೇಳಿದ್ದಾರೆ.