ನಲಪಾಡ್ ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯ ಮಗ, ಹಾಲಿ ಶಾಸಕರ ಪುತ್ರನಾಗಿದ್ದು, ಸಿಸಿಟಿವಿಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಕಂಡು ಬಂದಿದೆ, ವಿದ್ವತ್ ಮೇಲೆ ಆತ ಮಸಲ್ ಪವರ್ ತೋರಿರುವುದು ಸಾಬೀತಾಗಿದೆ. ರೆಸ್ಟೊರೆಂಟ್ ನಲ್ಲಿ ಗಾಯಾಳುವನ್ನು ರಕ್ಷಿಸಲು ಯಾರು ಬರಲಿಲ್ಲ, ಇಡೀ ಕೃತ್ಯ ತುಂಬಾ ಭಯಂಕರ ಹಾಗೂ ಭಯಾನಕವಾಗಿತ್ತು, ಆತನ ಬಳಿ ಶಕ್ತಿ ಹಾಗೂ ಅಧಿಕಾರ ಬಲವಿದೆ, ಒಂದು ವೇಳೆ ನಾನು ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೇ ಅಧಿಕಾರ ದುರುಪಯೋಗ ಪಡಿಸಿಕೊಂಡು ಸಾಕ್ಷಿಗಳನ್ನು ನಾಶ ಮಾಡುವ ಸಾಧ್ಯತೆಯಿರುತ್ತದೆ ಎಂದು ಹೇಳಿದೆ.