ಇದರಂತೆ ಯುವತಿಯ ಮನೆಯವರು ಯುಗಾದಿ ಹಬ್ಬದ ದಿನದಂದು ದೀಪಕ್ ನನ್ನು ಮನೆಗೆ ಕರೆದಿದ್ದಾರೆ. ಈ ವೇಳೆ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಈ ವೇಳೆ ಈಗಲೇ ಮದುವೆ ಬೇಡ ಎಂದು ಹೇಳಿದ್ದಾರೆ. ಈ ವೇಳೆ ತೀವ್ರವಾಗಿ ಕೆಂಡಾಮಂಡಲಗೊಂಡ ಯುವತಿಯ ಪೋಷಕರು ಯುವಕನನ್ನು ಪೊಲೀಸ್ ಠಆಣೆಗೆ ಕರೆದೊಯ್ದಿದ್ದಾರೆ. ಬಳಿಕ ಯುವಕರನ ತಾಯಿಯನ್ನು ಪೊಲೀಸ್ ಠಾಣೆಗೆ ಕರೆಸಿದ ಪೊಲೀಸರು ಮಾತುಕತೆ ನಡೆಸಿದ್ದಾರೆ. ಈ ವೇಳೆ ಯುವಕನ ತಾಯಿ ಮಂಗಳ ಮದುವೆಗೆ ಒಪ್ಪಿ, ವಿವಾಹದ ದಿನಾಂಕವನ್ನು ನಿಶ್ಚಯಿಸುವುದಾಗಿ ತಿಳಿಸಿದ್ದಾರೆ.