ಬೆಂಗಳೂರು: "ಮತ ಹಾಕುವುದು ನಮ್ಮ ಹಕ್ಕು, ಅದು ದಾನವಲ್ಲ. ’ಮತದಾನ’ ಪದವನ್ನು ನಿಷೇಧಿಸಿ!" ಬೆಂಗಳೂರು ಶಿವಾಜಿನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ಒತ್ತಾಯಿಸಿದ್ದಾರೆ.
ಮತದಾನ ಎನ್ನುವ ಪರ ಬಳಕೆ ನಿಲ್ಲಿಸಬೇಕೆಂದು ಒತ್ತಾಯಿಸಿ ಶಿವಾಜಿನಗರ ಪಕ್ಷೇತರ ಅಭ್ಯರ್ಥಿ ಅಂಬ್ರೋಸ್ ಡಿ.ಮೆಲ್ಲೋ ಮೌನ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಛೇರಿಯ ಮುಂದೆ ಪ್ರತಿಭಟನೆಯಲ್ಲಿ ತೊಡಗಿದ್ದ ಅವರು ಚುನಾವಣೆ ವೇಳೆ ಮತದಾನ ಎನ್ನುವ ಪದ ಬಳಕೆಯಾಗಬಾರದು, ಮತ ಚಲಾಯಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಹೀಗಾಗಿ ಮತದಾನ ಪದಕ್ಕೆ ಬದಲು ಮತ ಹಾಕಿ ಎಂದು ಬಳಸಿ ಎಂದು ಆಗ್ರಹಿಸಿದ್ದಾರೆ.