ಮುಂದುವರಿದ ಐಟಿ ದಾಳಿ: ಮೊಳಕಾಲ್ಮೂರಿನಲ್ಲಿ 2.17 ಕೋಟಿ ರೂ ಜಪ್ತಿ!

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ವಿಚಕ್ಷಣ ದಳ ಮತ್ತು ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸ್ಕಾರ್ಪಿಯೋ ಕಾರ್ ಜಪ್ತಿ ಮಾಡಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚಿತ್ರದುರ್ಗ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ವಿಚಕ್ಷಣ ದಳ ಮತ್ತು ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸ್ಕಾರ್ಪಿಯೋ ಕಾರ್ ಜಪ್ತಿ ಮಾಡಿರುವ 
ಸಿಬ್ಬಂದಿ ರು. 2.17 ಕೋಟಿ ಹಣ ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶ ಹಾಗೂ ಕರ್ನಾಟಕ ಗಡಿ ಭಾಗದ ರಾಯದುರ್ಗದ ಬಳಿಯ ಯದ್ದಲಬೊಮ್ಮನಹಟ್ಟಿಯಲ್ಲಿ ಹಣ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಸ್ಕಾರ್ಪಿಯೋ ವಾಹನದ ಮೇಲೆ ದಾಳಿ ನಡೆಸಿದ ಸಿಬ್ಬಂದಿಗೆ ಹಣ ಸಿಕ್ಕಿದೆ. ಬಳ್ಳಾರಿ ನೋಂದಣಿ ಹೊಂದಿರುವ ಸ್ಕಾರ್ಪಿಯೋ ಚಾಲಕ ಉಮಾ ಶಂಕರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಗಣಿ ಧಣಿ ಜನಾರ್ಧನ ರೆಡ್ಡಿ ಆಪ್ತ ಬಿ ಶ್ರೀರಾಮುಲು ಸ್ಪರ್ಧೆಯಿಂದ ಮೊಳಕಾಲ್ಮೂರು ಹೈ ವೊಲ್ಟೇಜ್ ಕದನ ಕಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com