ಮೂಲಗಳ ಪ್ರಕಾರ ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರ್ಜುನ್ ಕುಮಾರ್ ಸಿಕ್ರಿ ಅವರು ಈ ಅರ್ಜಿಯ ವಿಚಾರಣೆ ನಡೆಸಲಿದ್ದು, ವಿಶ್ವಾಸಮತಕ್ಕೂ ಮುನ್ನ ಎಲ್ಲರ ಚಿತ್ತ ಇದೀಗ ಸುಪ್ರೀಂ ಕೋರ್ಟ್ ನತ್ತ ನೆಟ್ಟಿದೆ. ಒಂದು ವೇಳೆ ಬೋಪಯ್ಯ ಅವರನ್ನೇ ಸುಪ್ರೀಂ ಕೋರ್ಟ್ ಹಂಗಾಮಿ ಸ್ಪೀಕರ್ ಆಗಿ ಮುಂದುವರೆಸಲು ಆದೇಶ ನೀಡಿದರೆ, ಅದರ ಬೆನ್ನಲ್ಲೇ ಇತ್ತ ವಿಧಾನಸೌಧದಲ್ಲಿ ನೂತನ ಶಾಸಕರಿಗೆ ಅವರೇ ಪ್ರಮಾಣ ವಚನ ಬೋಧಿಸಲಿದ್ದಾರೆ.