ಬಳಿಕ ಸ್ಥಳೀಯ ಮುಳುಗು ತಜ್ಞರ ನೆರವಿನಿಂದ ನೀರಿನಲ್ಲಿ ಮುಳುಗಿದ್ದ ವೆಂಕಟೇಶ್ ಅವರ ಶವ ಹೊರ ತೆಗೆಯಲಾಗಿದ್ದು, ಅಷ್ಟು ಹೊತ್ತಿಗಾಗಲೇ ವೆಂಕಟೇಶ್ ಸಾವನ್ನಪ್ಪಿದ್ದರು. ಈ ವೇಳೆ ಒಂದು ಕೈ ಮತ್ತು ಒಂದು ಕಾಲನ್ನು ಮೊಸಳೆ ತಿಂದು ಹಾಕಿತ್ತು. ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೊಸಳೆಗಳಿರುವ ಕುರಿತು ಸೂಚನಾ ಫಲಕಗಳಿದ್ದರೂ ಪ್ರವಾಸಿಗರು ಇದನ್ನು ಗಮನಿಸುತ್ತಿಲ್ಲ. ಈ ಬಗ್ಗೆ ಪ್ರವಾಸಿಗರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.