2012ರಲ್ಲಿ ಬೆಳಗಾವಿಯ ಸವಿತಾ ಹಾಲಪ್ಪನವರ್ ತೀವ್ರ ನೋವಿನಿಂದ ಆಸ್ಪತ್ರೆಗೆ ತೆರಳಿದರು. ಈ ವೇಳೆ, ‘ಗರ್ಭಪಾತವಾಗಲಿದೆ’ ಎಂದು ವೈದ್ಯರು ಹೇಳಿದರಾದರೂ ವೈದ್ಯಕೀಯ ನೆರವು ನೀಡಲು ನಿರಾಕರಿಸಿದರು. ವೈದ್ಯಕೀಯ ಗರ್ಭಪಾತ ನಡೆಸುವುದು ‘ಕಾನೂನಿಗೆ ವಿರುದ್ಧ’ ಎಂದು ತಿರಸ್ಕರಿಸಿದರು. ಹೀಗಾಗಿ, ಸಮರ್ಪಕ ಚಿಕಿತ್ಸೆ ಸಿಗದೆ ದಂತ ವೈದ್ಯೆ ಸವಿತಾ ಸಾವನ್ನಪ್ಪಬೇಕಾದದ್ದು ಆಘಾತಕಾರಿಯಾದುದಾಗಿತ್ತಲ್ಲದೆ ಜನರ ಪ್ರಜ್ಞೆಯನ್ನು ಕಲಕಿತ್ತು.