ಧಾರವಾಡ: ಬರ್ಗರ್ ನಲ್ಲಿದ್ದ ಟೂತ್ ಪಿಕ್ ನುಂಗಿ ವ್ಯಕ್ತಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಧಾರವಾಡ ಮೂಲದ ಪರಿಸರವಾದಿಯೊಬ್ಬರು ಬರ್ಗರ್ ನಲ್ಲಿ ಸಿಕ್ಕ ಟೂತ್ ಪಿಕ್ ನುಂಗಿದ ಕಾರಣ ಕೆಲ ಕಾಲ ಅಸ್ವಸ್ಥಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಧಾರವಾಡ ಮೂಲದ ಪರಿಸರವಾದಿಯೊಬ್ಬರು ಬರ್ಗರ್ ನಲ್ಲಿ ಸಿಕ್ಕ ಟೂತ್ ಪಿಕ್ (ಹಲ್ಲಿನನಡುವೆ ಸಿಕ್ಕಿದ ಆಹಾರದ ತುಣುಕನ್ನು ತೆಗೆಯಲು ಬಳಸುವ ಕಡ್ಡಿಯಂತಹಾ ಸಾಧನ) ನುಂಗಿದ ಕಾರಣ  ಅಸ್ವಸ್ಥಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವಾರ ನಡೆದಿದ್ದ ಎನ್ ಜಿಒ ಒಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವಳಿ ನಗರದಲ್ಲಿ ಹೆಸರಾಗಿರುವ ಪರಿಸರವಾದಿ ಪ್ರಕಾಶ್ ಭಟಾಸ್ಪತ್ರೆಗೆ ದಾಖಲಾಗಿದ್ದರು. ಸಿಇಒ ಅವರ ವಿದಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಅಲ್ಲಿ ನೀಡಲಾಗಿದ್ದ ಬರ್ಗರ್ ತಿಂದಿದ್ದರು. ಬರ್ಗರ್ ಜತೆ ನೀಡಿದ್ದ ಚೆರ್ರಿಯಲ್ಲಿದ್ದ ಟೂತ್ ಪಿಕ್ ನ್ನು ಸಹ ಅವರು ನುಂಗಿದ್ದರು. ಇದರಿಂದ ಅವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾರ್ಯಕ್ರಮದ ನಡುವೆ ಅಸ್ವಸ್ಥರಾದ ಅವರನ್ನು ಎನ್ ಜಿಒ ಕಾರ್ಯಕರ್ತರು ಸಮೀಪದ ಶ್ರೇಯಾ ನಗರದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿನ ವೈದ್ಯರು ಭಟ್ ಅವರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದು ಅಂದು ಸಂಜೆ ಅವರು ಆಸ್ಪತ್ರೆಯಿಂದ ಮರಳೀದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com