ಅಲಿಖಾನ್ ರಿಮೈಂಡ್ ಅಪ್ಲಿಕೇಶನ್ ನಲ್ಲಿ ಆತನ ಹೆಸರಿತ್ತು. ಆದರೆ, ರೆಡ್ಡಿಯವರ ಹೆಸರಿರಲಿಲ್ಲ. ರೆಡ್ಡಿಯವರನ್ನು ಸುಖಾಸುಮ್ಮನೆ ಕರೆಸಿಕೊಂಡಿದ್ದಾರೆ. 5ನೇ ಆರೋಪಿ ಅಲಿಖಾನ್ 4ನೇ ಆರೋಪಿ ರಮೇಶ್ ನಿಂದ ಚಿನ್ನ ಪಡೆದಿದ್ದಾನೆಂದು ಹೇಳಲಾಗುತ್ತಿದೆ. ಹೀಗಾಗಿ ಅಲಿಖಾನ್ ಚಿನ್ನ ಕೊಡಬೇಕೇ ವಿನಃ 6ನೇ ಆರೋಪಿ ರೆಡ್ಡಿಯಲ್ಲ. ರೆಡ್ಡಿಗೂ ಚಿನ್ನಕ್ಕೂ ಸಂಬಂಧವಿಲ್ಲ. ಆದರೆ, ಪ್ರಕರಣದ 1ನೇ ಆರೋಪಿ ಫರೀದ್'ಗೆ ಜಾಮೀನು ಸಿಕ್ಕಿದೆ. ಉಳಿದ ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಆದರೆ, ದೂರಿಗೆ ಸಂಬಂಧವೇ ಇಲ್ಲದ 6ನೇ ಆರೋಪಿ ರೆಡ್ಡಿಯವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಿದರು.