ಅನಂತ್ ಕುಮಾರ್ ವಿಧಿವಶರಾದ ಸುದ್ದಿ ಬೆಳಿಗ್ಗೆ 4 ಗಂಟೆಗೆ ಬಂದಿತ್ತು. ಈ ವೇಳೆ ಮಕ್ಕಳಿಗೆ ಆಹಾರವನ್ನು ಸಿದ್ಧಪಡಿಸಲಾಗುತ್ತಿತ್ತು. ಸುದ್ದಿಯನ್ನು ಎಲ್ಲರಿಗೂ ಶೀಘ್ರಗತಿಯಲ್ಲಿ ತಲುಪಿಸಲು ಅಸಾಧ್ಯವಾಗಿತ್ತು. ನಮಗೆ ನಿಧನ ಸುದ್ದಿ ಬಂದಾಗ ರಾಜ್ಯ ಸರ್ಕಾರ ಆಗಾಗಲೇ ಶಾಲೆಗಳಿಗೆ ರಜೆ ಘೋಷಣೆ ಮಾಡಿತ್ತು. ಈ ವೇಳೆ ಅಡುಗೆಯ ಸಾಕಷ್ಟು ಕಾರ್ಯಗಳು ಮುಕ್ತಾಯಗೊಂಡಿದ್ದರು. ಸಂಸದ್ ಗ್ರಾಮ ಯೋಜನೆ ಅಡಿಯಲ್ಲಿ ಅನಂತ್ ಕುಮಾರ್ ಅವರು ದತ್ತು ಪಡೆದುಕೊಂಡಿದ್ದ ರಾಗಿ ಹಳ್ಳಿ, ಸ್ಲಂಗಳಿಗೂ ಆಹಾರವನ್ನು ಕಳುಹಿಸಲಾಗಿತ್ತು ಎಂದು ಸಿಬ್ಬಂದಿಗಳು ಹೇಳಿದ್ದಾರೆ.