ಹಂತಕರಿಗೆ ಗೌರಿ ಲಂಕೇಶ್ ಅವರೊಂದಿಗೆ ಯಾವುದೇ ರೀತಿಯ ವೈಯಕ್ತಿಕ ವೈಷಮ್ಯಗಳಿರಲಿಲ್ಲ. ಹಾಗಾದರೆ, ಯಾವ ಕಾರಣಕ್ಕೆ ಅವರನ್ನು ಹತ್ಯೆ ಮಾಡಲಾಯಿತು? ಇದಕ್ಕೆ ಕಾರಣ ಅವರು ನಂಬಿದ್ದ ಕೆಲ ಸಿದ್ಧಾಂತಗಳು. ಈ ಸಿದ್ಧಾಂತದ ಬಗ್ಗೆ ಅವರು ಬರೆಯುತ್ತಿದ್ದ ಬರವಣಿಗೆ ಹಾಗೂ ಆಡುತ್ತಿದ್ದ ಮಾತುಗಳು. ಸಿದ್ಧಾಂತ ಹಾಗೂ ಸಂಘಟನೆಯೇ ಇದಕ್ಕೆ ಕಾರಣವಿರಬಹುದು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್. ಬಾಲನ್ ಅವರು ಹೇಳಿದ್ದಾರೆ.