ಮಧ್ಯಪ್ರದೇಶದ ಜಬಲ್ಪುರದ ಮಹಾಮದಲೇಶ್ವರ್ ಅಖಿಲೇಶ್ವರನಂದಗಿರಿ ಮಹಾರಾಜ್ ಅವರು ಮಾತನಾಡಿ, ರಾಮಮಂದಿರದ ಪರ ಅಥವಾ ವಿರುದ್ಧ ಯಾವುದೇ ರೀತಿಯ ಆದೇಶಗಳೇ ಬರಲಿ. ಆದರೆ, ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ದೇಶದ ಸಾಧುಗಳು ನಿರ್ಧರಿಸಿದ್ದಾರೆ. ಶಬರಿಮಲೆ ವಿಚಾರದಲ್ಲಿ ಆದೇಶ ನೀಡಿ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿರಬಹುದು. ಆದರೆ, ರಾಮ ಮಂದಿರ ವಿಚಾರದಲ್ಲಿ ಹಾಗಾಗುವುದಿಲ್ಲ ಎಂದು ಹೇಳಿದ್ದಾರೆ.