ಈ ಸಂಬಂಧ ಅಕ್ಟೋಬರ್9 ರಂದು ರಾಜಗೋಪಾಲನಗರದ ಸಿ, ವಿಜಯ್ ಕುಮಾರ್, ದಂಪತಿ ವಿರುದ್ದ ದೂರು ದಾಖಲಿಸಿದ್ದರು. ವಿಜಯ್ ಕುಮಾರ್ ತಾವು ಆಸ್ಪತ್ರೆ ನಿರ್ಮಿಸಲು ಜಾಗ ಕೊಂಡುಕೊಳ್ಳಲು ಸಿದ್ದರಿದ್ದು ಅದಕ್ಕಾಗಿ ಭೂಮಿ ಬೇಕೆಂದು ಹೇಳಿದ್ದರು. ದಂಪತಿ ತಮ್ಮ ಜಮೀನನ್ನು ಅವರಿಗೆ ಮಾರಾಟ ಮಾಡುವುದಾಗಿ ನಂಬಿಸಿ1.90 ಕೋಟಿ ರು ಹಣ ವಸೂಲಿ ಮಾಡಿದ್ದರು. ಜೊತೆಗೆ ವಿಜಯ್ ಕುಮಾರ್ ಅವರಿಗೆ ಜಮೀನಿಗೆ ಸಂಬಂಧಿಸಿದ ದಾಖಲಾತಿ ಗಳನ್ನು ನೀಡಿದ್ದರು, ಇದನ್ನು ಪರಿಶೀಲಿಸಿದ ದೂರುದಾರ ಅದು ನಕಲಿ ಎಂದು ತಿಳಿದು ಬಂದಿದೆ.