ಬೆಳಗಾವಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ವಿಶ್ವನಾಥ(ರಾಜಣ್ಣ) ಮಾಮನಿ ಇಂದು ವಿಧಿವಶರಾಗಿದ್ದಾರೆ. .ಅನ್ನನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ವಿಶ್ವನಾಥ್ ಮಾಮನಿ ಹುಬ್ಬಳ್ಳಿಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ..2004 ರಲ್ಲಿ ಸವದತ್ತಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ವಿಶ್ವನಾಥ್, ತಮ್ಮ ಸೌಮ್ಯ ಸ್ವಭಾವದಿಂದಲೇ ಜನರ ಮನ ಗೆದ್ದವರು. ಸವದತ್ತಿ ಪುರಸಭೆಯ ಸದಸ್ಯರಾಗಿಯೂ ವಿಶ್ವನಾಥ್ ಸೇವೆ ಸಲ್ಲಿಸಿದ್ದರು..58 ವರ್ಷದ ವಿಶ್ವನಾಥ್ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ವಿಶ್ವನಾಥ್ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ..ಇನ್ನು ವಿಶ್ವನಾಥ್ ಮಾಮನಿ ಅವರ ಅಂತ್ಯಕ್ರಿಯೆ ಇಂದು ಸಂಜೆ 6 ಗಂಟೆಗೆ ಸವದತ್ತಿಯಲ್ಲಿ ನಡೆಯಲಿದೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಬೆಳಗಾವಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ವಿಶ್ವನಾಥ(ರಾಜಣ್ಣ) ಮಾಮನಿ ಇಂದು ವಿಧಿವಶರಾಗಿದ್ದಾರೆ. .ಅನ್ನನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ವಿಶ್ವನಾಥ್ ಮಾಮನಿ ಹುಬ್ಬಳ್ಳಿಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ..2004 ರಲ್ಲಿ ಸವದತ್ತಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ವಿಶ್ವನಾಥ್, ತಮ್ಮ ಸೌಮ್ಯ ಸ್ವಭಾವದಿಂದಲೇ ಜನರ ಮನ ಗೆದ್ದವರು. ಸವದತ್ತಿ ಪುರಸಭೆಯ ಸದಸ್ಯರಾಗಿಯೂ ವಿಶ್ವನಾಥ್ ಸೇವೆ ಸಲ್ಲಿಸಿದ್ದರು..58 ವರ್ಷದ ವಿಶ್ವನಾಥ್ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ವಿಶ್ವನಾಥ್ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ..ಇನ್ನು ವಿಶ್ವನಾಥ್ ಮಾಮನಿ ಅವರ ಅಂತ್ಯಕ್ರಿಯೆ ಇಂದು ಸಂಜೆ 6 ಗಂಟೆಗೆ ಸವದತ್ತಿಯಲ್ಲಿ ನಡೆಯಲಿದೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ