ನವರಾತ್ರಿ ಇಂದಿನಿಂದ ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಸಿದ್ಧ ಶಕ್ತಿ ಕೇಂದ್ರಗಳಾದ ಶೃಂಗೇರಿ, ಹೊರನಾಡು, ಕೊಲ್ಲೂರು, ಕಟೀಲು, ಮಂಗಳಾದೇವಿ, ಬಪ್ಪನಾಡು, ಪೊಳಲಿ, ಶಿರಸಿ, ಬನಶಂಕರಿ, ಸವದತ್ತಿ, ಸಿರಸಂಗಿ ಕ್ಷೇತ್ರಗಳಲ್ಲೂ ಇಂದಿನಿಂದ ನವರಾತ್ರಿ ಉತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ಅದೇ ರೀತಿ ಮಂಗಳೂರಿನ ಇತಿಹಾಸ ಪ್ರಸಿದ್ಧ ಕುದ್ರೋಳಿ ದಸರಾ ಉತ್ಸವಕ್ಕೂ ಭರದ ತಯಾರಿಗಳು ನಡೆದಿದೆ.