ಬೆಂಗಳೂರು: ನಿಮ್ಹಾನ್ಸ್ ಆವರಣದಲ್ಲಿನ ರಸ್ತೆ ಬದಿಗಳಲ್ಲಿ ವಾಹನ ನಿಲುಗಡೆ ತಡೆಯುವ ಉದ್ದೇಶದಿಂದ ಕೈಗೊಂಡಿರುವ ಕ್ರಮ ಪಾದಚಾರಿಗಳು ಹಾಗೂ ಸವಾರರ ಸುರಕ್ಷತೆಗೆ ಹಾನಿಯಾಗಿ ಮಾರ್ಪಟ್ಟಿದೆ.
ಹೊರಗಿನವರ ವಾಹನಗಳಿಗೆ ಪಾರ್ಕಿಂಗ್ ತಡೆಯುವ ನಿಟ್ಟಿನಲ್ಲಿ ಭದ್ರತಾ ಸಿಬ್ಬಂದಿಗಳು ಪಾದಾಚಾರಿ ಮಾರ್ಗದುದ್ದಕ್ಕೂ ಕಾಂಕ್ರೀಟ್ ಬ್ಲಾಕ್ಸ್ ಗೆ ಹೊಂದಿಕೊಂಡಂತಿರುವ ಕಬ್ಬಿಣದ ಕಂಬವನ್ನು ಹಾಕುತ್ತಿದ್ದಾರೆ.