ಸಾರ್ವಜನಿಕ ಅರ್ಜಿಗಳನ್ನು ಬೇಗ ವಿಲೇವಾರಿ ಮಾಡದಿದ್ದರೇ ಕೆಲಸದಿಂದ ವಜಾ: ಕಂದಾಯ ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

ಸಾಧ್ಯವಾದಷ್ಟು ಬೇಗ ಜನರ ಕಷ್ಟಗಳಿಗೆ ಸ್ಪಂದಿಸಿ. ಬೇಜವಾಬ್ದಾರಿ ವರ್ತನೆ ತೋರಿ ನನ್ನನ್ನು ಕೆಟ್ಟವನನ್ನಾಗಿ ಮಾಡಬೇಡಿ ಎಂದು ಕಂದಾಯ ಅಧಿಕಾರಿಗಳಿಗೆ ....
ಎಚ್.ಡಿ ಕುಮಾರ ಸ್ವಾಮಿ
ಎಚ್.ಡಿ ಕುಮಾರ ಸ್ವಾಮಿ
ಬೆಂಗಳೂರು: ಸಾಧ್ಯವಾದಷ್ಟು ಬೇಗ ಜನರ ಕಷ್ಟಗಳಿಗೆ ಸ್ಪಂದಿಸಿ. ಬೇಜವಾಬ್ದಾರಿ ವರ್ತನೆ ತೋರಿ ನನ್ನನ್ನು ಕೆಟ್ಟವನನ್ನಾಗಿ ಮಾಡಬೇಡಿ ಎಂದು ಕಂದಾಯ ಅಧಿಕಾರಿಗಳಿಗೆ  ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ,
ರಾಮನಗರದಲ್ಲಿ ಮಾತನಾಡಿದ ಅವರು,  ರಾಮನಗರ ಕ್ಷೇತ್ರದ ಜನ ಅರ್ಜಿ ಹಿಡಿದುಕೊಂಡು ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಬಂದರೇ ಅವರ ಕಷ್ಟಗಳಿಗೆ ಸ್ಪಂದಿಸಿ, ಇಲ್ಲವಾದರೇ ನಿಮ್ಮನ್ನು ಅಮಾನತುಗೊಳಿಸಲಾಗುವುದು, ಆ ಮಟ್ಟಕ್ಕೆ ನನ್ನನ್ನು ತಳ್ಳಬೇಡಿ ಎಂದು ಹೇಳಿದ್ದಾರೆ.
ಜನ ನಿಮ್ಮ ಬಳಿ ಸಮಸ್ಯೆ ಹೇಳಿಕೊಂಡು ಬಂದಾಗ  ಒಂದು ವಾರ, 10 ದಿನ ಇಲ್ಲವೇ 1 ತಿಂಗಳು ಸಮಯ ತೆಗೆದುಕೊಳ್ಳಿ, ಆದರೆ ಕೆಲಸ ಮುಗಿಸಿಕೊಡಿ ಎಂದು ಹೇಳಿದ್ದಾರೆ, 
ರಾಮನಗರದ ಕ್ಷೇತ್ರದ ಜನತೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೇ ನಾನು ಕೆಟ್ಟವನಾಗಬೇಕಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com