ಇದಲ್ಲದೆ, ಹತ್ಯೆಯಾದ ಬಳಿಕ 10 ದಿನಗಳ ಕಾಲ ಗೊಂದಲೇಕರ್ ನಗದಲ್ಲಿಯೇ ವಾಸವಿಲ್ಲ. ಹತ್ಯೆಗೆ ಬಳಸಲಾಗಿದ್ದ ಪಿಸ್ತೂಲನ್ನು ಪಡೆದುಕೊಂಡ ಗೊಂದಲೇಕರ್ ನಂತರ ಅದನ್ನು ಸುರಕ್ಷಿತ ಪ್ರದೇಶದಲ್ಲಿರಿಸಿದ್ದ. ಇನ್ನು ಕಾಳೆ ಡೈರಿಯಲ್ಲಿ ಮತ್ತೊಬ್ಬ ಆರೋಪಿ ಶ್ರೀಕಾಂತ್ ಪಂಗರ್ಕರ್ ಹೆಸರೂ ಕೂಡ ಇದ್ದು, ಈತನ ವಶಕ್ಕಾಗಿ ಎಸ್ಐಟಿ ಕಾಯುತ್ತಿದೆ. ಅಮೋಲ್ ಕಾಳೆ ಪಂಗರ್ಕರ್ ಜೊತೆಗೆ ಮೊಬೈಲ್ ನಲ್ಲಿ ಸಂದೇಶಗಳನ್ನು ಕಳುಹಿಸಿದ್ದು, ಈತನಿಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ಸಂಬಂಧವಿದೆ ಎಂದು ಶಂಕಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.