ಮಡಿಕೇರಿ: ಗಣೇಶ ವಿಸರ್ಜನೆ ವೇಳೆ ಕೆರೆಗೆ ಬಿದ್ದು ಬಾಲಕ ದುರ್ಮರಣ

ಗಣೇಶ ವಿಸರ್ಜನ್ಗೆ ತೆರಳಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಡಿಕೇರಿ ಜಿಲ್ಲೆ ಕುಶಾನನಗರದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮಡಿಕೇರಿ: ಗಣೇಶ ವಿಸರ್ಜನ್ಗೆ ತೆರಳಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಡಿಕೇರಿ ಜಿಲ್ಲೆ ಕುಶಾನನಗರದಲ್ಲಿ ನಡೆದಿದೆ.
ಕುಶಾಲನಗರದ ಸಿದ್ಧಲಿಂಗಪುರದ ಅರಶಿನಕುಪ್ಪೆಯಲ್ಲಿ ನಡೆದ ಘಟನೆಯಲ್ಲಿ ಹೇಮಂತ್ (13) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಸಿದ್ದಲಿಂಗಪುರ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದ ಹೇಮಂತ್ ಸ್ಥಳೀಯ ನಿವಾಸಿಯಾದ ಅನಂತಕುಮಾರ್ ಹಾಗೂ ಪದ್ಮ ದಂಪತಿಯ ಪುತ್ರ್.
ಗುರುವಾರ ಮಧ್ಯಾಹ್ನ 12 ಬಾಲಕರ ಗುಂಪು ಗಣೇಶ ವಿಸರ್ಜನೆಗಾಗಿ ಕೆರೆಗೆ ತೆರಳಿದ್ದಾರೆ. ಈ ವೇಳೆ ಹೇಮಂತ್ ನೀರಲ್ಲಿ ಮುಳುಗಿದ್ದಾನೆ.  ಸ್ಥಳದಲ್ಲಿದ್ದ ಉಳಿದವರಾರಿಗೂ ಈಜು ಬರದ ಕಾರಣ ಯಾರೂ ರಕ್ಷಣೆಗೆ ಮುಂದಾಗಿರಲಿಲ್ಲ ಎಂದು ಸ್ಥಳೀಯರು ವಿವರಿಸಿದರು.
ಘಟನೆ ಕುರಿತು ಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com