ಬೆಂಗಳೂರು: ಕರ್ನಾಟಕ ಆಡಳಿತ ವಿಭಾಗ ಹಾಗೂ ಪೋಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ನಡೆಸಿದೆ. 30 ಕೆಎಎಸ್ ಅಧಿಕಾರಿಗಳು ಹಾಗೂ 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸುವ ಮೂಲಕ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಮಹತ್ವದ ಬೆಳವಣಿಗೆಯಲ್ಲಿ ರೌಡಿಗಳ ಸಿಂಹ ಸ್ವಪ್ನವಾದ ಪ್ರಸ್ತುತ ಉತ್ತರ ವಲಯದ ಐಜಿಪಿಯಾಗಿರುವ ಅಲೋಕ್ ಕುಮಾರ್ ಸಿಸಿಬಿ ಎಡಿಜಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಗುಪ್ತಚರ ವಿಭಾಗಡಿಐಜಿ ಸಂದೀಪ್ ಪಾಟೀಲ್ ಸಿಎಆರ್ಗೆ ವರ್ಗಾವಣೆಯಾಗಿದ್ದಾರೆ.
ಎಸಿಬಿಯಲ್ಲಿದ್ದ ಅಲೋಕ್ ಮೋಹನ್ ರೈಲ್ವೇ ಎಡಿಜಿಪಿ, ಪಿ ರವೀಂದ್ರನಾಥ್ ಎಡಿಜಿಪಿ ಅರಣ್ಯ ವಿಭಾಗ, ಸಂಜಯ್ ಸಹಾಯ್ ಎಡಿಜಿಪಿ ಪೊಲೀಸ್ ಕಂಪ್ಯೂಟರ್ ವಿಭಾಗ, ಎ.ಎಸ್ ಮೂರ್ತಿ ಎಡಿಜಿಪಿ ಲೋಕಾಯುಕ್ತ, ಎಲ್ ಸತೀಶ್ ಕುಮಾರ್, ಡಿಐಜಿ ಕೆಎಸ್ಆರ್ಪಿ, ಬೆಂಗಳೂರು ವಿಭಾಗಗಳಿಗೆ ವರ್ಗಾಯಿಸಲ್ಪಟ್ಟಿದ್ದಾರೆ.
ಇನ್ನು ವರ್ಗಾವಣೆಯಾಗಿರುವ ಕೆಎಎಸ್, ಐಪಿಎಸ್ ಧಿಕಾರಿಗಳ ವಿವರ ಕೆಳಕಂಡಂತಿದೆ-