ಬೆಂಗಳೂರು: ಅಡುಗೆ ಅನಿಲ ಸ್ಟೋಟ: ಕಟ್ಟಡ ಕುಸಿತದಿಂದ ನಾಲ್ವರಿಗೆ ಗಾಯ !

ಅಡುಗೆ ಅನಿಲ ಸೋರಿಕೆಯಿಂದ ಕಟ್ಟಡ ಧ್ವಂಸಗೊಂಡು ಒಂದೇ ಕುಟುಂಬದ ನಾಲ್ವರು ಗಾಯಗೊಂಡಿರುವ ಘಟನೆ ಕೆಜಿ ಹಳ್ಳಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಅಡುಗೆ ಅನಿಲ ಸ್ಟೋಟದಿಂದ  ಕಟ್ಟಡ ಧ್ವಂಸಗೊಂಡು ಒಂದೇ ಕುಟುಂಬದ ನಾಲ್ವರು  ಗಾಯಗೊಂಡಿರುವ ಘಟನೆ  ಕೆಜಿ ಹಳ್ಳಿಯಲ್ಲಿ ನಡೆದಿದೆ.

ಗಾಯಾಳುಗಳನ್ನು  ಚಂದ್ ಪಾಶ (71) ಆತನ ಪತ್ನಿ ಸಮ್ರತಾ (60) ಹಾಗೂ ಅವರ ಕುಟುಂಬದ ಸದಸ್ಯರಾದ ಅಂಜುಮ್ (17) ಮತ್ತು ರಫೀಕ್ (38) ಎಂದು ಗುರುತಿಸಲಾಗಿದೆ.

 ಕುಟುಂಬದ ಸದಸ್ಯರೆಲ್ಲರೂ ಇನ್ನೂ ನಿದ್ರೆಯಲ್ಲಿರುವಾಗ ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಡುಗೆ ಅನಿಲ ಸೋರಿಕೆಯಿಂದಾಗಿ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದ್ದು, ಭಾರೀ ಶಬ್ದ ಉಂಟಾಗಿದೆ.  ಸುತ್ತಮುತ್ತಲಿನವರು ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ತಿಳಿಸಲಾಗಿ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ  ಗಾಯಾಳುಗಳನ್ನು  ರಕ್ಷಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com