ಚಂಡಿಕಾಂಬ ದೇವಾಲಯದ ವಾರ್ಷಿಕ ಉತ್ಸವದ ಆಚರಣೆಗಾಗಿ ಬಾಳೆಹಣ್ಣುಗಳನ್ನು ತರಲು ಮೂವರೂ ನೆಲಮಾಳಿಗೆಯಲ್ಲಿದ್ದ ಕೋಣೆಗೆ ಹೋಗಿದ್ದಾರೆ. ವಾರಗಳ ಹಿಂದೆ ಇಲ್ಲಿ ಬಾಳೆಕಾಯಿಗಳನ್ನಿಟ್ಟಿದ್ದು ಅವು ಹಣ್ಣಾಗುವುದಕ್ಕಾಗಿ ರಾಸಾಯನಿಕಗಳನ್ನು ಸಿಂಪಡಿಸಲಾಗಿತ್ತು. ಈ ವೇಳೆ ಕೋಣೆ ಪ್ರವೇಶಿಸಿದ್ದ ವೆಂಕಟೇಶ್ ಮತ್ತು ಮಂಜೇಗೌಡ ರಾಸಾಯನಿಕಯುಕ್ತ ವಿಷಗಾಳಿಯ ಸೇವನೆ ಮಾಡಿದ ಕೆಲಕ್ಷಣದಲ್ಲಿಯೇ ಮೃತಪಟ್ಟರು ಎಂದು ವರದಿಗಳು ಹೇಳಿದೆ.