ದಕ್ಷತೆ, ಪ್ರಾಮಾಣಿಕತೆ, ಕರ್ತವ್ಯಪರತೆಯಿಂದಾಗಿ ನಾಡಿನ ಮನೆಮಾತಾಗಿದ್ದ ಅಧಿಕಾರಿಯೊಬ್ಬರ ಅಕಾಲಿಕ ಮರಣದಿಂದ ರಾಜ್ಯಕ್ಕೆ ರಾಜ್ಯವೇ ದಿಗ್ಭ್ರಮೆಗೊಂಡಿದ್ದು. ಅವರ ಆಪ್ತ ವಲಯದಲ್ಲಿದ್ದವರು ಮಧುಕರ್ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಅವರ ಪತ್ನಿ ಸಹ ಕಾಂಟಿನೆಂಟಲ್ ಆಸ್ಪ್ತ್ರೆಯ ಅಸಮರ್ಪಕ ಚಿಕಿತ್ಸೆ ಕುರಿತು ಅನುಮಾನಗೊಂಡಿದ್ದರು. ಇನ್ನು ಗೃಹಸಚಿವರಾಗಿದ್ದ ಎಂಬಿ ಪಾಟೀಲ್ ಸಂಶಯವಿದ್ದಲ್ಲಿ ತನಿಖೆಗೆ ಆದೇಶಿಸುವದಾಗಿ ಹೇಳಿಕೆ ನಿಡಿದ್ದರು.ಇದರಂತೆ ರಾಜ್ಯ ಸರ್ಕಾರ ಮಧುಕರ್ ಶೆಟ್ಟಿ ಸಾವಿನ ನ್ಯಾಯಾಂಗ ತನಿಖೆಗೆ ನಿರ್ಧರಿಸಿದೆ.