ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಂಚನೆಗೆ ವಿಧಾನಸೌಧವೇ ಅಡ್ಡಾ: ಗೋಡಂಬಿ ಉದ್ಯಮಿಗೆ ಪಂಗನಾಮ, ಮಾಜಿ ಶಾಸಕನ ಮಗ, ಮೊಮ್ಮಗ ಬಂಧನ

ಉದ್ಯಮಿಗೆ ವಂಚಿಸಿದ ಪ್ರಕರಣದಲ್ಲಿ ಮಾಜಿ ಶಾಸಕನ ಮಗ ಮತ್ತು ಮೊಮ್ಮಗ ಸೇರಿ ಹಲವರನ್ನು ಬಂಧಿಸಿದ್ದಾರೆ....
Published on
ಬೆಂಗಳೂರು: ಉದ್ಯಮಿಗೆ ವಂಚಿಸಿದ ಪ್ರಕರಣದಲ್ಲಿ ಮಾಜಿ ಶಾಸಕನ ಮಗ ಮತ್ತು ಮೊಮ್ಮಗ ಸೇರಿ ಹಲವರನ್ನು ಬಂಧಿಸಿದ್ದಾರೆ.
100 ಕೋಟಿ ರು ಸಾಲ ನೀಡುವುದಾಗಿ ಭರವಸೆ ನೀಡಿ ಉದ್ಯಮಿಯಿಂದ 1.12 ಕೋಟಿ ಹಣ ಪಡೆದು ಉದ್ಯಮಿಗೆ ವಂಚಿಸಿದ ಪ್ರಕರಣದಲ್ಲಿ ಕಬ್ಬನ್ ಪಾರ್ಕ್ ಪೊಲೀಸರು, ಶೇಷಾದ್ರಿಪುರಂ ನಿವಾಸಿ ಪಿ. ಕಾರ್ತಿಕೇಯನ್ ಹಾಗೂ ಆತನ ಪುತ್ರ ಸ್ವರೂಪ್  ಕಾರ್ತಿಕೇಯನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ತಿಕೇಯನ್ ತಂದೆ ಪಳನಿಯಪ್ಪನ್ 1950 ರಲ್ಲಿ ಶಿವಾಜಿ ನಗರ ಶಾಸಕರಾಗಿದ್ದರು, ದಾರುದಾರ ರಮೇಶ್  ಗೋಡಂಬಿ ಉದ್ಯಮ ಆರಂಭಿಸಲು 100 ಕೋಟಿ ರು ಸಾಲ ಬಯಸಿದ್ದರು. ಅವರು ಕಾರ್ತಿಕೇಯನ್  ಭೇಟಿ ಮಾಡಿದರು, ಆರೋಪಿ ಕಾರ್ತಿಕೇಯನ್ ತನಗೆ ಸರ್ಕಾರಿ ಅಧಿಕಾರಿಗಳ ಜೊತೆ ಸಂಪರ್ಕವಿದ್ದು, ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ಭರವಸೆ ನೀಡಿದ್ದ.
ಈ ಹಿನ್ನೆಲೆಯಲ್ಲಿ ರಮೇಶ್, 1.12 ಕೋಟಿ ರು ಹಣವನ್ನು ಸ್ವರೂಪ್ ಗೆ ನೀಡಿದ್ದರು, ಆದರೆ ಹಣ ಪಡೆದ ನಂತರ ಆರೋಪಿಗಳು ಸಂಪರ್ಕಕ್ಕೆ ಸಿಗಲಿಲ್ಲ, ರಮೇಶ್ ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಿದ ಪೊಲೀಸರು ಅವರಿಂದ 40 ಲಕ್ಷ ರು. ಹಣ ಜಪ್ತಿ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com