ಪುಲ್ವಾಮ ಉಗ್ರ ದಾಳಿ: ಕರ್ನಾಟಕದ ಯೋಧ ಗುರು ಹುತಾತ್ಮ!
ಪುಲ್ವಾಮ ಉಗ್ರ ದಾಳಿ: ಕರ್ನಾಟಕದ ಯೋಧ ಗುರು ಹುತಾತ್ಮ!

ಪುಲ್ವಾಮ ಉಗ್ರ ದಾಳಿ: ಕರ್ನಾಟಕದ ಯೋಧ ಗುರು ಹುತಾತ್ಮ!

ಪುಲ್ವಾಮದಲ್ಲಿ ಫೆ.14 ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಪೈಕಿ ಕರ್ನಾಟಕದ ಯೋಧ ಸಹ ಇದ್ದಾರೆ.
ಬೆಂಗಳೂರು: ಪುಲ್ವಾಮದಲ್ಲಿ ಫೆ.14 ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಪೈಕಿ ಕರ್ನಾಟಕದ ಯೋಧ ಸಹ ಇದ್ದಾರೆ. 
ಹುತಾತ್ಮ ಯೋಧರ ಸಂಖ್ಯೆ 44 ಕ್ಕೆ ಏರಿಕೆಯಾಗಿದ್ದು, ಹುತಾತ್ಮ ಯೋಧರಿಗಾಗಿ ದೇಶದ ಜನತೆಯ ದುಃಖಮಡುಗಟ್ಟಿದೆ.  
18 ವರ್ಷಗಳಿಂದ ಸಿಆರ್ ಪಿಎಫ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕದ ಮಂಡ್ಯದ ಗುಡಿಗೆರೆಯ ಯೋಧ ಹೆಚ್ ಗುರು ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. 
ಕಳೆದ 6 ತಿಂಗಳ ಹಿಂದೆ ವಿವಾಹವಾಗಿದ್ದ ಯೋಧ ಗುರು, ರಜೆಗಾಗಿ ಕಳೆದ ವಾರ ಊರಿಗೆ ಬಂದಿದ್ದರು. ರಜೆ ಮುಗಿಸಿಕೊಂಡು ವಾಪಸ್ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಬೆನ್ನಲ್ಲೇ ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆಯ ಗುರು 2011 ರಲ್ಲಿ ಸಿಆರ್ ಪಿಎಫ್ ಗೆ ಸೇರಿದ್ದರು.

Related Stories

No stories found.

Advertisement

X
Kannada Prabha
www.kannadaprabha.com