ತಾಹೀರ್ ಲತೀಫ್
ರಾಜ್ಯ
ಬೆಂಗಳೂರು: ಪುಲ್ವಾಮಾ ಉಗ್ರ ದಾಳಿ ಸಂಭ್ರಮಿಸಿದ್ದ ಕಾಶ್ಮೀರಿ ವಿದ್ಯಾರ್ಥಿಯ ಬಂಧನ
ಕಳೆದ ಗುರುವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ಸಂಭ್ರಮಿಸಿದ ಮತ್ತು ಜೈಶ್ -ಇ-ಮೊಹಮ್ಮದ ಸಂಘಟನೆಯನ್ನು....
ಬೆಂಗಳೂರು: ಕಳೆದ ಗುರುವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ಸಂಭ್ರಮಿಸಿದ ಮತ್ತು ಜೈಶ್ -ಇ-ಮೊಹಮ್ಮದ ಸಂಘಟನೆಯನ್ನು ಹೊಗಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ತಾಹೀರ್ ಲತೀಫ್ ನನ್ನು ಶನಿವಾರ ಬಾಗಲೂರು ಪೊಲೀರು ಬಂಧಿಸಿದ್ದಾರೆ.
ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ 23 ವರ್ಷದ ತಾಹೀರ್ ಲತೀಫ್ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ ಎನ್ನಲಾಗಿದೆ.
ಬಂಧಿತ ಆರೋಪಿ. ದಾಳಿ ನಡೆಸಿದ ಉಗ್ರನ ಪರವಾಗಿ ಫೇಸ್ ಬುಕ್ ನಲ್ಲಿ ಬಿಗ್ ಸೆಲ್ಯೂಟ್ , ನಿನಗೆ ಸ್ವರ್ಗ ಪ್ರಾಪ್ತಿಯಾಗುತ್ತೆ ಎಂದು ಬರೆದುಕೊಂಡಿದ್ದನು.
ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಲತೀಫ್ ವಿರುದ್ದ ಪೊಲೀಸರು ಅಪರಾಧಿಕ ಒಳಸಂಚು ಕೃತ್ಯಕ್ಕೆ ಬೆಂಬಲಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ