ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪ್ರೇಮಿಗಳ ದಿನ ಬ್ಯಾಗ್ ನಲ್ಲಿದ್ದ ಪ್ರೇಮಪತ್ರ ಶಿಕ್ಷಕರ ಕೈಗೆ ಸಿಕ್ಕಿದ್ದರಿಂದ ವಿದ್ಯಾರ್ಥಿ ಆತ್ಮಹತ್ಯೆ

ಪ್ರೇಮಿಗಳ ದಿನದಂದು ಸ್ಕೂಲ್ ಬ್ಯಾಗ್ ನಲ್ಲಿದ್ದ ಪ್ರೇಮ ಪತ್ರ ಶಿಕ್ಷಕರ ಕೈಗೆ ಸಿಕ್ಕಿದ್ದರಿಂದ ಭೀತಿಗೊಂಡ 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಬೆಂಗಳೂರು:ಪ್ರೇಮಿಗಳ ದಿನದಂದು ಸ್ಕೂಲ್ ಬ್ಯಾಗ್ ನಲ್ಲಿದ್ದ ಪ್ರೇಮ ಪತ್ರ ಶಿಕ್ಷಕರ ಕೈಗೆ ಸಿಕ್ಕಿದ್ದರಿಂದ ಭೀತಿಗೊಂಡ 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
 
ಸಿದ್ದೇಶ್ ಮೃತ ವಿದ್ಯಾರ್ಥಿಯಾಗಿದ್ದಾನೆ.8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ವಿದ್ಯಾರ್ಥಿ ಪೋಷಕರ ಬಗ್ಗೆ ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ತಿಳಿದುಬಂದಿದೆ.

ಸಿದ್ದೇಶ್ ಪೋಷಕರಾದ ಸಿದ್ದರಾಜು ಮತ್ತು ಸಣ್ಣಮ್ಮ ರತ್ನ ಆಂಧ್ರಪ್ರದೇಶದಿಂದ ವಲಸೆ ಬಂದವರಾಗಿದ್ದು, ಕೆಂಗನಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.  ಈ ದಂಪತಿ ಕೂಲಿ ಕಾರ್ಮಿಕರಾಗಿ ಬದುಕು ಸಾಗಿಸುತ್ತಿದ್ದಾರೆ.

ಸಿದ್ದೇಶ್  9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬಳನ್ನು ಇಷ್ಟಪಟ್ಟು ಪ್ರೇಮಿಗಳ ದಿನದಂದು ಆಕೆಗೆ ಕೊಡಬೇಕೆಂದು ಪತ್ರ ಬರೆದು ತನ್ನ ಬ್ಯಾಗ್ ನಲ್ಲಿಟ್ಟುಕೊಂಡಿದ್ದ. ಬ್ಯಾಗ್ ತಪಾಸಣೆ ವೇಳೆಯಲ್ಲಿ ಶಿಕ್ಷಕರಿಗೆ ಕೈಗೆ ಪತ್ರ ದೊರೆತಿದ್ದು ಪ್ರಶ್ನಿಸಲು ಶುರು ಮಾಡಿದ್ದಾರೆ  ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಆಗ ಏನನ್ನೂ ಪ್ರತಿಕ್ರಿಯಿಸಿದ್ದರಿಂದ ಮಾರನೆ ದಿನ ತಂದೆಯನ್ನು ಕರೆದುಕೊಂಡು ಬರುವಂತೆ ಸಿದ್ದೇಶ್ ಗೆ ಹೇಳಿದ್ದರಿಂದ ಭೀತಿಗೊಂಡ ಆತ ಶಾಲೆಯ ಬಳಿ ಇರುವ ಫಾರ್ಮ್ ಗೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತದೇಹವನ್ನು ನೋಡಿದ ಗ್ರಾಮಸ್ಥರು ಮಾದನಾಯಕನಹಳ್ಳಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.  ವಿಚಾರಣೆ ನಡೆಸುತ್ತಿರುವ ಪೊಲೀಸರು ಪ್ರಿನ್ಸಿಪಾಲರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com